Sunday, January 18, 2009

ಬೆಳದಿಂಗಳ ಬಾಲೆ

ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್ವದಿಂದ ಬೀಗಿದ. ಆದರೆ ಎಲ್ಲೂಒಂದು ಲೂಒಪ ಎದ್ದು ಕಾಣುತಿತ್ತು. ಎಷ್ಟಾದರೂ ಜಡ, ಜದವಲ್ಲವೀ? ಇದನ್ನರಿತ ಬ್ರಹ್ಮ ಜೀವದ ಬೀಜವನ್ನು ಭೂಮಿಗೆ ತರಲುನಿಸ್ಚಿಯಿಸಿದ. ಅಂದಿಗೆ ಶುರುವಾಯಿತು ಭುವಿಯ ಮೇಲೆ ಜೀವ. ವೈರಸ್, ಬ್ಯಾಕ್ಟೀರಿಯ, ಕ್ರಿಮಿ ಕೀಟ, ಜಲರಾಷಿಗಳು ಒಂದೊಂದಾಗಿಸೃಷ್ಟಿಗೊಂಡವು. ಇಷ್ಟೆಲ್ಲಾ ಆದರೂ ತನ್ನ ಸೃಷ್ಟಿಯಲ್ಲಿ ಏನೋ ಕೊರತೆ ಇದೆ ಎಂದು ಬ್ರಹ್ಮ ಕೊರಗುತ್ತಿದ್ದನು, ಕಾರಣ ತಿಳಿಯದೆ ನರಳುತ್ತಿದ್ದನು. ಇದೆ ರೀತಿಯಲ್ಲ ಜಗತ್ತು ಕೆಲವು ಯುಗಗಳವರೆಗೂ ನಡೆಯಿತು.